D. V. G.
Publisher - ಸಾಹಿತ್ಯ ಭಂಡಾರ
Regular price
Rs. 220.00
Regular price
Rs. 220.00
Sale price
Rs. 220.00
Unit price
per
- Free Shipping Above ₹200
- Cash on Delivery (COD) Available
Pages - 212
Type - Paperback
ವಿದ್ಯಾರಣ್ಯ ಸ್ವಾಮಿಗಳವರು ಕೈಗೊಂಡಿದ್ದ ಮಹಾ ವ್ಯವಸಾಯದಲ್ಲಿ ನೆಲವನ್ನು ಉತ್ತು ಸರಿಪಡಿಸಿಕೊಡುವುದಕ್ಕೂ ಪೈರಿಗೆ ನೀರು ಕಟ್ಟಿ ಕಳೆ ತೆಗೆಯುವುದಕ್ಕೂ ತಕ್ಕಷ್ಟು ಮಂದಿ ಸಾಹ್ಯಕರ್ತರು ಸಿದ್ಧರಾಗಿದ್ದರು. ಅಂಥವರಲ್ಲಿ ಮುಖ್ಯರಾದವರ ವೃತ್ತಾಂತಗಳನ್ನು ಸಾಧ್ಯವಿರುವಮಟ್ಟಿಗೆ ತಿಳಿಸಲು ಇಲ್ಲಿ ಯತ್ನಿಸುವೆವು.
ಇವರಲ್ಲಿ ಕೆಲವರ ಚರಿತ್ರೆಗಳು ವಿದ್ಯಾರಣ್ಯರ ಸ್ವಂತ ಚರಿತ್ರೆಗೆ ಅಂಗಗಳಂತೆ ಸಂಬಂಧಪಟ್ಟಿವೆ ವಿದ್ಯಾರಣ್ಯತಿಹಾಸದಲ್ಲಿ ವಾಚಕರಿಗೆ ಸಂದೇಹಾಸ್ಪದವೆಂದು ತೋರಿರಬಹುದಾದ ಕೆಲವು ಅಂಶಗಳು ಈ ಮಹನೀಯರುಗಳ ಉಪಾಖ್ಯಾನಗಳಿಂದ ನಿಷ್ಕರ್ಷೆಯಾಗಿ ವಿಶದವಾಗುತ್ತವೆ; ಮತ್ತು ವಿದ್ಯಾರಣ್ಯರ ಕಾರ್ಯಕಲಾಪದ ಬಹು ಭಾಗವು ಈ ಮಹನೀಯರುಗಳ ಮೂಲಕವೇ ಪ್ರಕಾಶಗೊಂಡಿರತಕ್ಕುದಾಗಿದೆ. ಇದೂ ಅಲ್ಲದೆ, ಪಂಡಿತರೂ ಸಮರ್ಥರೂ ಆಗಿದ್ದ ಇವರುಗಳ ಪ್ರಭಾವವನ್ನು ಸ್ಮರಿಸಿ ನೋಡಿದರೆ, ಅವರ ಕಾಲವು ಎಷ್ಟು ಕಾಂತಿವಿಶಿಷ್ಟವಾಗಿದ್ದಿತು, ಎಷ್ಟು ಮಹಿಮಾನ್ವಿತವಾಗಿದ್ದಿತು, ಎಷ್ಟುಮಟ್ಟಿಗೆ ಜೀವಕಳಾ ಸಂಪನ್ನವಾಗಿದ್ದಿತು ಎಂಬುದು ನಮ್ಮ ಮನಸ್ಸಿಗೆ ಚೆನ್ನಾಗಿ ಸ್ಫುರಿಸುತ್ತದೆ.
ಇವರಲ್ಲಿ ಕೆಲವರ ಚರಿತ್ರೆಗಳು ವಿದ್ಯಾರಣ್ಯರ ಸ್ವಂತ ಚರಿತ್ರೆಗೆ ಅಂಗಗಳಂತೆ ಸಂಬಂಧಪಟ್ಟಿವೆ ವಿದ್ಯಾರಣ್ಯತಿಹಾಸದಲ್ಲಿ ವಾಚಕರಿಗೆ ಸಂದೇಹಾಸ್ಪದವೆಂದು ತೋರಿರಬಹುದಾದ ಕೆಲವು ಅಂಶಗಳು ಈ ಮಹನೀಯರುಗಳ ಉಪಾಖ್ಯಾನಗಳಿಂದ ನಿಷ್ಕರ್ಷೆಯಾಗಿ ವಿಶದವಾಗುತ್ತವೆ; ಮತ್ತು ವಿದ್ಯಾರಣ್ಯರ ಕಾರ್ಯಕಲಾಪದ ಬಹು ಭಾಗವು ಈ ಮಹನೀಯರುಗಳ ಮೂಲಕವೇ ಪ್ರಕಾಶಗೊಂಡಿರತಕ್ಕುದಾಗಿದೆ. ಇದೂ ಅಲ್ಲದೆ, ಪಂಡಿತರೂ ಸಮರ್ಥರೂ ಆಗಿದ್ದ ಇವರುಗಳ ಪ್ರಭಾವವನ್ನು ಸ್ಮರಿಸಿ ನೋಡಿದರೆ, ಅವರ ಕಾಲವು ಎಷ್ಟು ಕಾಂತಿವಿಶಿಷ್ಟವಾಗಿದ್ದಿತು, ಎಷ್ಟು ಮಹಿಮಾನ್ವಿತವಾಗಿದ್ದಿತು, ಎಷ್ಟುಮಟ್ಟಿಗೆ ಜೀವಕಳಾ ಸಂಪನ್ನವಾಗಿದ್ದಿತು ಎಂಬುದು ನಮ್ಮ ಮನಸ್ಸಿಗೆ ಚೆನ್ನಾಗಿ ಸ್ಫುರಿಸುತ್ತದೆ.