Su. Rudramurthy Shastri
Publisher - ಅಂಕಿತ ಪುಸ್ತಕ
Regular price
Rs. 650.00
Regular price
Rs. 650.00
Sale price
Rs. 650.00
Unit price
per
- Free Shipping Above ₹200
- Cash on Delivery (COD) Available
Pages - 664
Type - Hardcover
ಭಾರತ ಭಾಗವತಗಳನ್ನು, ಕವಿಯಾಗಿ ಅಧ್ಯಯನ ಮಾಡಿ, ಅರ್ಥೈಸಿಕೊಂಡ ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿಗಳು, ಶ್ರೀಕೃಷ್ಣನನ್ನು ಈ ದೃಷ್ಟಿಯಿಂದ ಜಗದ್ಗುರುವಾಗಿ ನೋಡಿದರೋ ಏನೋ. ಶ್ರೀಕೃಷ್ಣನ ಅಂತರಂಗವನ್ನು ಪ್ರವೇಶಿಸಿ, ಶ್ರೀಕೃಷ್ಣ ಪುರುಷೋತ್ತಮನಾದುದನ್ನು ಈ ಕಾದಂಬರಿಯ ಮೂಲಕ, ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಶ್ರೀಕೃಷ್ಣ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯನಾಗಿ ಹುಟ್ಟಿದವನೆ. ಆತನು ಸಾಮಾನ್ಯ ಮಾನವ ಧರ್ಮವನ್ನು ಅನುಸರಿಸುತ್ತಾ, ಪ್ರತಿಯೊಬ್ಬರಿಂದ ಒಂದೊಂದು ಮಾನವೀಯತೆಯ ಪಾಠಗಳನ್ನು ಕಲಿಯುತ್ತಾ, ಅವುಗಳನ್ನು ತನ್ನ ನಿಜಜೀವನದಲ್ಲಿ ಅನುಸರಿಸಿ, ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತಾ ಬೆಳೆದಿದ್ದಾನೆ. ಈ ರೀತಿ ಪ್ರತಿಯೊಬ್ಬ ಮಾನವನೂ ಪುರುಷೋತ್ತಮನಾಗಬಹುದು ಎಂಬುದು ಈ ಕಾದಂಬರಿ ನಮಗೆ ನೀಡುವ ಸಂದೇಶ ಎಂದು ನಾನಾದರೂ ಭಾವಿಸಿದ್ದೇನೆ.
- ಆರ್. ಶೇಷಶಾಸ್ತ್ರಿ (ಮನ್ನುಡಿಯಿಂದ)
- ಆರ್. ಶೇಷಶಾಸ್ತ್ರಿ (ಮನ್ನುಡಿಯಿಂದ)