Dr. T R Anantharamu
Publisher - ನವಕರ್ನಾಟಕ ಪ್ರಕಾಶನ
Regular price
Rs. 80.00
Regular price
Rs. 80.00
Sale price
Rs. 80.00
Unit price
per
- Free Shipping Above ₹200
- Cash on Delivery (COD) Available
Pages - 101
Type - Paperback
ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಪಿತೃತರ್ಪಣಕೊಡುತ್ತ ನಾಗಭೂಷಣ ಪುಣ್ಯದ ಗಂಟು ಕಟ್ಟುತ್ತಿದ್ದಾಗ, ದೂರದಲ್ಲಿ ತೇಲಿಬರುತ್ತಿದ್ದ ವಸ್ತುವೊಂದು ಹತ್ತಿರ ಹತ್ತಿರ ಬರುತ್ತಿದ್ದಂತೆ ನಾನು ಹೌಹಾರಿದ್ದೆ. ಪಂಡಿತರು ಮಾತ್ರ ಎಲೆ ಅಡಿಕೆ ಜಗಿಯುತ್ತ, ಮಂತ್ರ ಹೇಳುತ್ತ, ಧುತ್ತೆಂದು ನದಿಯಲ್ಲಿ ಉಗಿಯುತ್ತ ಪ್ರಯಾಗದ ಪುಣ್ಯ ವಿಶೇಷಗಳನ್ನು ವರದಿ ಮಾಡುತ್ತಿದ್ದರು. 'ಸರಸ್ವತೀ ನದಿ ತೋರಿಸಿ' ಎಂದು ನಾನು ಅವರ ಬೆನ್ನು ಹತ್ತಿದೆ. 'ಹುಚ್ಚಪ್ಪ, ಅದೆಲ್ಲಿ ಕಣ್ಣಿಗೆ ಕಾಣುತ್ತದೆ, ಅದು ಇಲ್ಲಿ ಗುಪ್ತಗಾಮಿನಿ' ಎಂದು ನಕ್ಕರು. ನನಗೆ ನಗು ಬರಲಿಲ್ಲ. ಬದಲು ಈ ನದಿಯ ಬಗ್ಗೆ ನಿಜಕ್ಕೂ ಹುಚ್ಚೇ ಹಿಡಿದಿತ್ತು. ನಾನು ನೋಡುತ್ತಿದ್ದ ರುಂಡವಿಲ್ಲದ ಆಕೃತಿ ಉರುಳಿ ಉರುಳಿ ಹೋಗುತ್ತಿತ್ತು, ನನ್ನ ಮನಸ್ಸು ಮಾತ್ರ ಗುಪ್ತಗಾಮಿನಿಯನ್ನು ಹುಡುಕುತ್ತಿತ್ತು. ಭೂಗೋಳದ ಎಲ್ಲ ಎಲ್ಲೆಗಳನ್ನೂ ಮೀರಿ ಅಲಹಾಬಾದಿನಲ್ಲಿ ಗಂಗಾ ಯಮುನೆಯರನ್ನು ಕೂಡಲು ಸರಸ್ವತೀ ಗುಪ್ತಗಾಮಿನಿಯಾಗಿ ಬರಲು ಸಾಧ್ಯವೆ?