Dr. K. Shivaram Karanth
Publisher - ಐಬಿಹೆಚ್ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
per
- Free Shipping Above ₹200
- Cash on Delivery (COD) Available
Pages -
Type -
ನಮಗೆ, ನಮ್ಮ ಸಾಮಾಜಿಕ ಕಲ್ಪನೆಗಳಲ್ಲಿರುವ ದೋಷ, ಅದರಿಂದ ಹಲವರಿಗಾಗಬಹುದಾದ ಅನ್ಯಾಯ ತಿಳಿಯುವುದಿಲ್ಲ. ನಮ್ಮ ಅಸ್ಪೃಶ್ಯತಾ ಪದ್ದತಿ, ದಾಂಪತ್ಯ ನೀತಿ, ಜಾತಿಭೇದ ಮತ್ತು ಅಂತಹ ಇತರ ಅನೇಕ ಕಲ್ಪನೆಗಳು ಈ ರೂಢಿಗಳನ್ನು ಸಮರ್ಥಿಸುತ್ತವೆ. ಅದರಿಂದಾಗಿ, ಅವುಗಳ ಕುಂದುಕೊರತೆಗಳನ್ನು ನುಂಗಿಕೊಂಡು ಜನರು ಮೂಕರಾಗಿ ಬಾಳುವಂತೆ ಮಾಡುತ್ತವೆ. ಇಲ್ಲಿನ ಮೈಲಿಗಲ್ಲುಗಳು ನಮ್ಮ ನಾಡಿನ ಚರಿತ್ರೆಯನ್ನೋ, ಸಂಸ್ಕೃತಿಯನ್ನೋ, ಧಾರ್ಮಿಕ ಕಲ್ಪನೆಗಳ ವಿಕಾಸವನ್ನೂ ಗುರುತಿಸಿ ತೋರಿಸಬಲ್ಲ ಸಂಕೇತಗಳು. ಅಂಥ ಮೈಲಿಗಲ್ಲುಗಳು ಹಾಳು ಛತ್ರಗಳು, ಗುಡಿ ಇಲ್ಲದ ವಿಗ್ರಹಗಳು, ಗಡಿ ಕಲ್ಲುಗಳು, ಪುರಾತನರು ನಟ್ಟ ವಟವೃಕ್ಷಗಳು ಇಂಥವು ತಮ್ಮ ಆತ್ಮಕಥೆಯನ್ನು ಹೇಳುವುದಿದ್ದರೆ, ತಾವು ಸ್ಥಾಪನೆಗೊಂಡ ಕಾಲದಿಂದಲೂ ನಮ್ಮ ಕಣ್ಣಿಗೆ ಬೀಳುವ ಇಂದಿನ ತನಕವೂ ಎಂಥ ಸಂಕಷ್ಟಗಳನ್ನು ಅನುಭವಿಸಿದುವು, ಎಂಥಲ್ಲ ಜನರಿಂದ ಏನೇನು ಪಾಡನ್ನು ಪಟ್ಟುವು ಎಂಬುದನ್ನು ಪ್ರಶ್ನೆಗಳಿಗೆ ಉತ್ತರವಾಗಿ ಅವು ಹೇಳುವಂತೆ ಬರೆದೆ. ಹೀಗೆ ಕಲ್ಲುಗಳನ್ನು ಮಾತಾಡಿಸಿ ಪಾಷಾಣ ಪಂಡಿತನೆನಿಸಿಕೊಂಡೆ....
ಡಾ.ಕೆ. ಶಿವರಾಮ ಕಾರಂತ
ಡಾ.ಕೆ. ಶಿವರಾಮ ಕಾರಂತ