Venkatagiri Kadekar
Publisher - ಸಾಹಿತ್ಯ ಭಂಡಾರ
Regular price
Rs. 180.00
Regular price
Rs. 180.00
Sale price
Rs. 180.00
Unit price
per
- Free Shipping Above ₹200
- Cash on Delivery (COD) Available
Pages - 152
Type - Paperback
'ಕಪ್ಪೆಟ್ಟಜ್ಜನ ಮನೆಯ ಪಡೆಕೋಣೆ' ಈ ಕಾದಂಬರಿ ಶಿವಳ್ಳಿ ಬ್ರಾಹ್ಮಣ ಕುಟುಂಬವೊಂದರ ವಿವೇಚನೆಯ ಒಂದು ಮೆರಗನ್ನು ನೀಡಿ ಬದಲಾದ ಕಾಲದ ಸಮಾನಾಂತರ ವಾಸ್ತವಿಕ ಚಿಂತನೆಯಲ್ಲಿ ಅಪ್ರಾಸಾಂಗಿಕವಾಗದೆ ಕುತೂಹಲದಿಂದ ಮುಂದುವರಿಯುತ್ತದೆ. ಕಾದಂಬರಿಯ ಬೆಳವಣಿಗೆಯಲ್ಲಿ ಕಂಡು ಬರುವ ಪಾತ್ರ ಪಾತ್ರಗಳ ವಿಶಿಷ್ಟ ನಂಟು ಓದುಗನಿಗೆ ಸುಂದರ ಅನುಭವವನ್ನು ಕೊಡುತ್ತಾ ಸದ್ಯ ಸಮಾಜದ ಸಮ ವ್ಯಕ್ತಿಗಳನ್ನು ಅದು ಪ್ರತಿನಿಧಿಸಲೂಬಹುದು. ಅದಲ್ಲದೆ ಅವರ ಈ ಹಿಂದಿನ ಕಾದಂಬರಿ 'ಕೃಷ್ಣವೇಣಿ'ಯ ಕಿಟ್ಟಿಯಂತಹ ಓರ್ವ ಬಾಲವಿಧವೆ ಶಿವಳ್ಳಿ ಮಡಿವಂತ ಸಮಾಜದಲ್ಲಿ ಪಡುವ ಪಾಡು, ಆ ಧಾರ್ಮಿಕ ವ್ಯವಸ್ಥೆಯ ಹಿನ್ನಲೆಯಲ್ಲಿ ಅವಳ ಸಂಕಷ್ಟದ ಬದುಕು ಬಾಳು ಎಲ್ಲವೂ ಶಿವಳ್ಳಿ ಕುಟುಂಬಗಳ ಆಖ್ಯಾನ-ವ್ಯಾಖ್ಯಾನವೇ ಆಗಿರುವುದು ವಿಶೇಷ.
ಶ್ರೀ ವೆಂಕಟಗಿರಿ ಕಡೇಕಾರ್ ಸಾಹಿತ್ಯದ ಯಾವುದೇ ವರ್ಗ, ಪಂಥಗಳ ಬಗೆಗೆ ತಲೆಕೆಡಿಸಿಕೊಳ್ಳದೆ ತನ್ನದೇ ಧಾಟಿಯಲ್ಲಿ ಬರೆಯುತ್ತಾ ಬಂದ ಸ್ವಂತಿಕೆಯ ಲೇಖಕ, ಶ್ರೀಯುತರು ಕನ್ನಡದ ಓರ್ವ ವಿಶಿಷ್ಟ ಉತ್ತಮ ಕಥೆಗಾರ, ಕಾದಂಬರಿಕಾರ, ಕವಿ. ತನ್ನ ಕಥೆ, ಕಾದಂಬರಿ, ಕಾವ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಛಾಪಿನಿಂದ ಉಪಯೋಗಿಸುವ ಸರಳ ಭಾಷೆ. ಶೈಲಿ, ಸಂವಹನ, ನಿರೂಪಣೆಗಳು ಓದುಗನಿಗೆ ಮೆಚ್ಚುಗೆ ಒಪ್ಪುಗೆ.
ಶ್ರೀಯುತರು ಕರ್ಣಾಟಕ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಪ್ರಬಂಧಕನಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಇದೀಗ ಉಡುಪಿಯಲ್ಲಿ ಅವರ ಸ್ವಸ್ಥ ಜೀವನ ನಿರ್ವಹಣೆ ಓದು ಬರಹ ಎಲ್ಲವೂ.
೨೦೧೯ರಲ್ಲಿ ಲೇಖಕರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಗೌರವಿಸಿದೆ.
ಶ್ರೀ ವೆಂಕಟಗಿರಿ ಕಡೇಕಾರ್ ಸಾಹಿತ್ಯದ ಯಾವುದೇ ವರ್ಗ, ಪಂಥಗಳ ಬಗೆಗೆ ತಲೆಕೆಡಿಸಿಕೊಳ್ಳದೆ ತನ್ನದೇ ಧಾಟಿಯಲ್ಲಿ ಬರೆಯುತ್ತಾ ಬಂದ ಸ್ವಂತಿಕೆಯ ಲೇಖಕ, ಶ್ರೀಯುತರು ಕನ್ನಡದ ಓರ್ವ ವಿಶಿಷ್ಟ ಉತ್ತಮ ಕಥೆಗಾರ, ಕಾದಂಬರಿಕಾರ, ಕವಿ. ತನ್ನ ಕಥೆ, ಕಾದಂಬರಿ, ಕಾವ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಛಾಪಿನಿಂದ ಉಪಯೋಗಿಸುವ ಸರಳ ಭಾಷೆ. ಶೈಲಿ, ಸಂವಹನ, ನಿರೂಪಣೆಗಳು ಓದುಗನಿಗೆ ಮೆಚ್ಚುಗೆ ಒಪ್ಪುಗೆ.
ಶ್ರೀಯುತರು ಕರ್ಣಾಟಕ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಪ್ರಬಂಧಕನಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಇದೀಗ ಉಡುಪಿಯಲ್ಲಿ ಅವರ ಸ್ವಸ್ಥ ಜೀವನ ನಿರ್ವಹಣೆ ಓದು ಬರಹ ಎಲ್ಲವೂ.
೨೦೧೯ರಲ್ಲಿ ಲೇಖಕರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಗೌರವಿಸಿದೆ.