Ravi Belagere
Publisher - ಭಾವನಾ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 142
Type - Paperback
ಸಾಯಿಬಾಬಾ ಕೇವಲ ಕೈಚಳಕ ತೋರುವ ಯಕ್ಷಿಣಿಗಾರನಾಗಿದ್ದಿದ್ದರೆ ಜನಮೆಚ್ಚುಗೆ ಗಳಿಸುತ್ತಿದ್ದ. ಒಬ್ಬ ಸಂತನಾಗಿದ್ದರೆ, ಆಧ್ಯಾತ್ಮಕ್ಕೆ, ಗೊಡ್ಡು ಹರಟೆಗೆ ಕೊರತೆಯಿಲ್ಲದ ಈ ನಾಡಿನಲ್ಲೂ ಗೌರವಕ್ಕೆ ಪಾತ್ರನಾಗುತ್ತಿದ್ದ. ಆತ ಗ್ರಾಮಗಳಿಗೆ ತಲುಪಿಸಿದ ನೀರು, ಕಟ್ಟಿಸಿದ ಆಸ್ಪತ್ರೆಗಳು, ಶಾಲೆಗಳು, ಸ್ಥಾಪಿಸಿದ ವಿಶ್ವ - ವಿದ್ಯಾಲಯ ನಿಜಕ್ಕೂ ಮೆಚ್ಚಬಹುದಾದಂಥ ಸಂಗತಿಗಳೇ. ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಮಾತ್ರ ಸದ್ಯಕ್ಕೆ ಸಜೀವ ನರಕದಂತಿದೆ. ಅದು ಒತ್ತಟ್ಟಿಗಿರಲಿ: ಆದರೆ ಸಾಯಿಬಾಬಾ ಮೂಲತಃ ಒಬ್ಬ ವಂಚಕ, ಶಿಶುಕಾಮಿ ಮತ್ತು ಒರಿಜಿನಲ್ ಆದ ದಡ್ಡ. ಅಂಥವನ ಬೆಡ್ ರೂಮಿನಲ್ಲಿ ಘೋರಾತಿಘೋರ ಹತ್ಯೆಗಳು ನಡೆದರೆ ಭಾರತದ ಪ್ರಧಾನಿಯಿಂದ ಹಿಡಿದು ಪುಟ್ಟಪರ್ತಿಯ ಸಬ್ ಇನ್ಸ್ಪೆಕ್ಟರನ ತನಕ ಎಲ್ಲರೂ ಆತನನ್ನು ರಕ್ಷಿಸಲು ಚಡಪಡಿಸಿದರು. ಇಂಥ ಕೆಲಸ ಬೇರೆ ಯಾವ ದೇಶದಲ್ಲೂ ನಡೆದಿರಲಾರದು. ಇಲ್ಲಿ ಮಾತ್ರ ನಡೆಯಲು ಸಾಧ್ಯ: ಏಕೆಂದರೆ ಇದು ಭಾರತ.
-ರವಿ ಬೆಳಗೆರೆ