U. R. Ananth Murthy
Publisher - ಅಭಿನವ ಪ್ರಕಾಶನ
- Free Shipping Above ₹200
- Cash on Delivery (COD) Available
Pages -
Type -
ನಮ್ಮ ಈಚಿನ ಇತಿಹಾಸದಲ್ಲಿ ಎಪ್ಪತ್ತರ ದಶಕದ ಬದುಕು ಒಂದು ವಿಶೇಷವಾದ, ಗಂಭೀರವಾದ ಪರಿಶೀಲನೆಗೆ ಒಳಗಾಗಬೇಕಾಗಿತ್ತು. ಸಮಾಜಶಾಸ್ತ್ರಜ್ಞರು ಈ ಬಗ್ಗೆ ಬರೆದಿರಬೇಕೆಂದು ಆಶಿಸುತ್ತೇನೆ. ಆದರೆ ಎಪ್ಪತ್ತರ ದಶಕದ ಕನಸುಗಳು ಪ್ರಜಾತಂತ್ರದ ವೈಫಲ್ಯ ಪುನಶ್ಚೇತನ ಇವೆಲ್ಲವನ್ನೂ ಒಳನೋಟದಿಂದ ನೋಡಬೇಕೆಂಬ ಲೇಖಕನ ಆಸೆಗಳು, ಈ ಕಥೆಗಳಲ್ಲಿ ಕಾಣಿಸಬಹುದು. ಯಾಕೆಂದರೆ ಈ ದಶಕ ನಾವು ಕನಸುಗಳನ್ನು ಕಂಡ ಕಾಲ ಕನಸುಗಳು ಭಗ್ನವಾದ ಕಾಲ. ಕ್ರಾಂತಿಕಾರರೆಂದು ಭಾವಿಸಿಕೊಂಡ ಮಧ್ಯಮವರ್ಗ ಬ್ಯಾಡ್ ಫೈತ್ನಲ್ಲಿ ಬದುಕಿದ ಕಾಲ. ಬ್ಯಾಡ್ಫೈತ್ ಲೇಖಕನೊಬ್ಬ ತನ್ನ ಹೊರೆಗೆ ಕಾಣುತ್ತಿರುವುದು ಮಾತ್ರವಲ್ಲ; ತನ್ನ ಒಳಗೂ ಕಾಣುತ್ತಿರುವುದು.
ಗಾಂಧಿಯವರ ಮಾರ್ಗವನ್ನು ಪುನಶ್ಚೇತನಗೊಳಿಸಲು ಜಯಪ್ರಕಾಶ ನಾರಾಯಣರು ವಿಫಲರಾದರು. ರಾಜಕಾರಣದ ಜಾಗವನ್ನು ಪುಂಡುಪೋಕರಿಗಳು ಆಕ್ರಮಿಸಿದರು. ಸ್ವಜಾತಿಯ ಹೆಸರಲ್ಲಿ ಜಾತಿಯ ಕ್ರಾಂತಿಯನ್ನು ಮಾಡಿದರು. ಇಂಥ ಎಲ್ಲ ಸುಳ್ಳುಗಳು ನಮ್ಮನ್ನು ಈಗ ಒದ್ದು ಒದ್ದು ನೋಯಿಸುತ್ತಿವೆ.
ಯು.ಆರ್. ಅನಂತಮೂರ್ತಿ (ಅರಿಕೆಯಿಂದ)